ಕನ್ನಡ ನಾಡಿನ ದಾಸ ಶ್ರೇಷ್ಟರೂ, ಕೀರ್ತನೆ, ಉಗಾಭೋಗಾದಿಗಳ ರಚನಕಾರರೂ, ಕರ್ನಾಟಕ ಸಂಗೀತದ ದಿಗ್ಗಜರೂ ಆದ ಶ್ರೀ ಪುರಂದರ ದಾಸ ಹಾಗೂ ಶ್ರೀ ಕನಕದಾಸರ ಹೆಸರಿನಲ್ಲಿ ಸಂಗೀತದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆನೀಡಲಾಗುವ ಪ್ರಶಸ್ತಿ ಶ್ರೀ ಕನಕ-ಪುರಂದರ ಪ್ರಶಸ್ತಿ. ದಿನಾಂಕ:೦೪-೦೧-೨೦೧೦ರ ಸರ್ಕಾರದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ನಿಜಗುಣ-ಪುರಂದರ ಪ್ರಶಸ್ತಿಯೆಂದು ಮರು ನಾಮಕರಣ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಗಾಯನ ಮತ್ತು ವಾದ್ಯ ಪರಿಕರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರುಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ೫.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.
1. | ವಿದ್ವಾನ್ ತಿಟ್ಟೆ ಕೃಷ್ಣಯ್ಯಂಗಾರ್ | 1991 |
2. | ಡಾ: ಗಂಗೂಬಾಯಿ ಹಾನಗಲ್ | 1992 |
3. | ಶ್ರೀ ಆರ್.ಆರ್. ಕೇಶವಮೂರ್ತಿ | 1993 |
4. | ಡಾ: ಬಿಂದು ಮಾಧವ ಪಾಠಕ್ | 1994 |
5. | ಶ್ರೀ ಗಮಕಿ ರಾಘವೇಂದ್ರ | 1995 |
6. | ವಿದ್ವಾನ್ ಆರ್.ಕೆ. ಶ್ರೀಕಂಠನ್ | 1996 |
7. | ಡಾ: ಪುಟ್ಟರಾಜ ಗವಾಯಿ | 1997 |
8. | ಶ್ರೀ ಎಂ.ಎಸ್. ರಾಮಯ್ಯ | 1998 |
9. | ಶ್ರೀ ಶೇಷಗಿರಿ ಹಾನಗಲ್ | 1999 |
10. | ಶ್ರೀ ಭದ್ರಗಿರಿ ಅಚ್ಯುತದಾಸರು | 2000 |
11. | ಶ್ರೀ ಎ. ಸುಬ್ಬರಾವ್ | 2001 |
12. | ಶ್ರೀ ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ | 2002 |
13. | ಶ್ರೀ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ | 2003 |
14. | ಪಂಡಿತ ವಸಂತ ಕನಕಾಪುರ | 2004 |
15. | ಶ್ರೀ ಬಿ.ಎಸ್.ಎಸ್. ಕೌಶಿಕ್ | 2005 |
16. | ಪ್ರೊ: ವಿ. ರಾವ್ಮರತ್ನಂ | 2006 |
17. | ಶ್ರೀ ಚಂದ್ರಶೇಖರ ಪುರಾಣಿಕವ್ಮಠ | 2007 |
18. | ಶ್ರೀಮತಿ ಎನ್. ಚೊಕ್ಕಮ್ಮ | 2008 |
19. | ಶ್ರೀ ವೆಂಕಟೇಶ ಗೋಡ್ಕಿಂಡಿ, ಬೆಂಗಳೂರು | 2009 |
20. | ಶ್ರೀ ಲಕ್ಷ್ಮಣದಾಸ್, ತುಮಕೂರು | 2010 |
21. | ಶ್ರೀ ಕುರುಡಿ ವೆಂಕಣ್ಣಾಚಾರ್ | 2011 |
22. | ಪಂ. ಸಂಗಮೇಶ್ವರ ಗುರವ, ಧಾರವಾಡ | 2012 |
23. | ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್, ಬೆಂಗಳೂರು | 2013 |
24. | ಪಂ.ರಘುನಾಥ ನಾಕೋಡ್, ಧಾರವಾಡ | 2014 |
25. | ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು | 2015 |
26. | ಶ್ರೀ ಗಣಪತಿ ಭಟ್ ಹಾಸಣಗಿ, ಉತ್ತರ ಕನ್ನಡ | 2016 |
27. | ಶ್ರೀ ರಾಮದಾಸಪ್ಪ .ಬಿ, ಬೆಂಗಳೂರು | 2017 |
28. | ಶ್ರೀ ಬಿ.ಎಸ್.ಮಠ, ಧಾರವಾಡ | 2018 |
29. | ಶ್ರೀಮತಿ ಗೌರಿ ಕುಪ್ಪಸ್ವಾಮಿ, ಮೈಸೂರು | 2019 |
ಇತ್ತೀಚಿನ ನವೀಕರಣ : 10-02-2020 12:26 PM ಅನುಮೋದಕರು: Admin