ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಡಾ: ಗುಬ್ಬಿ ವೀರಣ್ಣನವರದು. ರಂಗಭೂಮಿಯ ಮನೆ ಮಾತಾಗಿದ್ದ ಮಹನೀಯರ ಸ್ಮರಣಾರ್ಥ ರಂಗಭೂಮಿಗೆ ಶ್ರಮಿಸಿದ ಶ್ರೇಷ್ಠ ನಾಟಕಕಾರರನ್ನು ಗುರುತಿಸಿ ಆ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಶ್ರೀಯುತರ ಹೆಸರಿನಲ್ಲಿ 1993ರಲ್ಲಿ ಡಾ: ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ. ಸರ್ಕಾರಿ ಆದೇಶ ಸಂಖ್ಯೆ: ಸಂಕಇ/91/ಕಗಾಧ/94, ಬೆಂಗಳೂರು, ದಿನಾಂಕ:19-09-1995 ರಂತೆ ಕರ್ನಾಟಕ ರಾಜ್ಯದ ವೃತ್ತಿ ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಡಾ. ರಾಜ್ಕುಮಾರ್ ರವರ ಹೆಸರಿನ ಪ್ರಶಸ್ತಿಯನ್ನು ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಎಂದು ಮಾರ್ಪಡಿಸಿದೆ.
ಕ್ರಮ ಸಂಖ್ಯೆ | ಹೆಸರು | ವರ್ಷ |
1. | ಶ್ರೀ ಏಣಗಿ ಬಾಳಪ್ಪ | 1994 |
2. | ಡಾ|| ಬಿ.ವಿ. ಕಾರಂತ | 1995 |
3. | ಡಾ|| ಗಿರೀಶ್ ಕಾರ್ನಾಡ್ | 1996 |
4. | ಮಾಸ್ಟರ್ ಹಿರಣ್ಣಯ್ಯ | 1997 |
5. | ಶ್ರೀ ಹೆಚ್.ಕೆ. ಯೋಗಾನರಸಿಂಹ | 1998 |
6. | ಶ್ರೀ ಪಿ.ಬಿ. ಧುತ್ತರಗಿ | 1999 |
7. | ಶ್ರೀ ಎಚ್.ಎನ್. ಹೂಗಾರ | 2000 |
8. | ಶ್ರೀಮತಿ ಆರ್. ನಾಗರತ್ನಮ್ಮ | 2001 |
9. | ಪದ್ಮಶ್ರೀ ಚಿಂದೋಡಿಲೀಲಾ | 2002 |
10. | ಶ್ರೀ ಬಿ.ಆರ್. ಅರಿಶಿಣಗೋಡಿ | 2003 |
11. | ಶ್ರೀ ಬಸವರಾಜ ಗುಡಿಗೇರಿ | 2004 |
12. | ಶ್ರೀಮತಿ ರೇಣುಕಮ್ಮ ಮುರಗೋಡು | 2005 |
13. | ಶ್ರೀಮತಿ ಜಿ.ವಿ. ಮಾಲತಮ್ಮ | 2006 |
14. | ಶ್ರೀಮತಿ ಸುಭದ್ರಮ್ಮ ಮನ್ಸೂರು | 2007 |
15. | ಶ್ರೀ ಹೆಚ್.ಟಿ. ಅರಸು | 2008 |
16. | ಶ್ರೀ ಪಿ. ವಜ್ರಪ್ಪ, ಬೆಂಗಳೂರು | 2009 |
17. | ಶ್ರೀಮತಿ ಪ್ರಮೀಳಮ್ಮ ಗುಡೂರ, ಬಾಗಲಕೋಟೆ | 2010 |
18. | ಶ್ರೀ ಎಲ್.ಬಿ.ಕೆ. ಅಲ್ದಾಳ್, ಗುಲ್ಬರ್ಗಾ | 2011 |
19. | ಶ್ರೀಮತಿ ಲಕ್ಚ್ಮಿಬಾಯಿ ಏಣಗಿ, ಧಾರವಾಡ | 2012 |
20. | ಶ್ರೀ ಫಕೀರಪ್ಪ ವರವಿ, ಗದಗ | 2013 |
21. | ಶ್ರೀಮತಿ ರಂಗನಾಯಕಮ್ಮ, ಬೆಂಗಳೂರು | 2014 |
22. | ಶ್ರೀ ಆರ್. ಪರಮಶಿವನ್, ಬೆಂಗಳೂರು | 2015 |
23. | ಶ್ರೀ ಚಿಂದೋಡಿ ಶ್ರೀಕಂಠೇಶ್, ದಾವಣಗೆರೆ | 2016 |
24. | ಶ್ರೀಮತಿ ಥೆರೆಸಮ್ಮ ಡಿಸೋಜಾ, ಹುಬ್ಬಳ್ಳಿ | 2017 |
25. | ಶ್ರೀ ಪ್ರಕಾಶ್ ಕಡಪಟ್ಟಿ, ಬಾಗಲಕೋಟೆ | 2018 |
ಇತ್ತೀಚಿನ ನವೀಕರಣ : 10-02-2020 12:25 PM ಅನುಮೋದಕರು: Admin